ಮಡಿಕೇರಿ, ಅ. 27: ಕೊಡಗು ಜಿಲ್ಲೆಯ 3 ತಾಲೂಕಿನ 295 ನ್ಯಾಯಬೆಲೆ ಅಂಗಡಿ ಪೈಕಿ 2018 ರ ಅಕ್ಟೋಬರ್ ಮಾಹೆಯಲ್ಲಿ 92 ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್ ಮೂಲಕ ಪಡಿತರ ಚೀಟಿದಾರರ ಬೆರಳ ಗುರುತು ಪಡೆದು ಪಡಿತರ ವಿತರಣೆ ಮಾಡಲಾಗುತ್ತಿದೆ.

ಪಡಿತರ ಚೀಟಿದಾರರು ಈ ಪದ್ಧತಿಯ ಮೂಲಕ ಪಡಿತರ ಪಡೆಯಲು ತಾ. 31 ಕೊನೆಯ ದಿನವಾಗಿದೆ. ಆದ್ದರಿಂದ ಈ ನ್ಯಾಯಬೆಲೆ ಅಂಗಡಿಗಳಿಗೆ ನಿಯೋಜಿಸಿರುವ ಪಡಿತರ ಚೀಟಿದಾರರು ತಾ. 31 ರೊಳಗೆ ತಮ್ಮ ಪಡಿತರ ಹಂಚಿಕೆಯನ್ನು ಪಡೆದುಕೊಳ್ಳಬೇಕಾಗಿದೆ. ನವೆಂಬರ್ 1 ರಿಂದ ಹಂಚಿಕೆ ಪ್ರಾರಂಭವಾಗುವದರಿಂದ ತಾ. 31 ರೊಳಗೆ ಪಡಿತರ ಪಡೆದುಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಸದಾಶಿವಯ್ಯ ತಿಳಿಸಿದ್ದಾರೆ.