ಕೂಡಿಗೆ, ಅ. 27: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿಗೆ ರಾಷ್ಟ್ರಮಟ್ಟದ ಪರಿವೀಕ್ಷಣಾ ತಂಡ ಭೇಟಿ ನೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಯ ಕಾಮಗಾರಿಯ ಕಡತಗಳನ್ನು ಹಾಗೂ ಉದ್ಯೋಗ ಖಾತರಿ ಯೋಜನೆಯ 2016-17ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳ ಮತ್ತು ವೃದ್ಧಾಪ್ಯ ಯೋಜನೆಯ ಕಡತಗಳನ್ನು ಪರಿಶೀಲನೆ ನಡೆಸಿತು. ರಚನೆಗೊಂಡಿರುವ ಸ್ವಸಹಾಯ ಸಂಘ ಗುಂಪುಗಳ ಬಗ್ಗೆ ಸದಸ್ಯರಿಂದ ಮಾಹಿತಿ ಪಡೆಯಿತು.

ನಂತರ ಗ್ರಾ.ಪಂ.ಯಲ್ಲಿ ಕಂಪ್ಯೂಟರೀಕರಣಗೊಂಡಿರುವದನ್ನು ಪರಿಶೀಲಿಸಿತು. ಸುಮಾರು ನಾಲ್ಕು ಗಂಟೆಗಳ ಕಾಲ ಕಡತಗಳನ್ನು ಪರಿಶೀಲಿಸಿದ ರಾಷ್ಟ್ರೀಯ ತಂಡದ ಡಾ.ಮುತ್ತುಕುಮಾರ್, ಸುಬ್ಬುಗುಣಶೇಖರ್ ಅವರು ಕಾಮಗಾರಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿದರು.

ಗಂಟೆಗಳ ಕಾಲ ಕಡತಗಳನ್ನು ಪರಿಶೀಲಿಸಿದ ರಾಷ್ಟ್ರೀಯ ತಂಡದ ಡಾ.ಮುತ್ತುಕುಮಾರ್, ಸುಬ್ಬುಗುಣಶೇಖರ್ ಅವರು ಕಾಮಗಾರಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿದರು.