ಮಡಿಕೇರಿ, ಅ. 28: ಕುಂಬಳದಾಳು ಗ್ರಾಮದ ಕುಯ್ಯಂಗೇರಿಯ ಪೇರಿಯನ ವಾಸುದೇವ ಅವರ ತೋಟದಲ್ಲಿ ಉರುಳು ಹಾಕಿ ಕಾಡು ಕುರಿಯನ್ನು ಕೊಂದು ಮಾಂಸ ಮಾಡಿದ್ದ ಪ್ರಕರಣವನ್ನು ಮಡಿಕೇರಿ ಅರಣ್ಯ ವಲಯದ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿ ಆರೋಪಿ ಕುಯ್ಯಂಗೇರಿಯ ನಿವಾಸಿ ಕುಂಜಿಲಂಡ ಹೇಮಂತ್ ಕುಮಾರ್ ಆಲಿಯಾಸ್ ರಾಜನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಅಂದಾಜು 3ಳಿ ಕೆ.ಜಿ. ಕಾಡು ಕುರಿ(ಮೊದಲ ಪುಟದಿಂದ) ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕೇಬಲ್ ವೈರ್, ಬಳಸಿದ ಕತ್ತಿ ವಶಪಡಿಸಿಕೊಂಡಿದ್ದಾರೆ.ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ವಲಯದ ಪ್ರಬಾರ ವಲಯಾಧಿಕಾರಿ ವೈ.ಕೆ. ಜಗದೀಶ್, ಉಪ ವಲಯ ಅರಣ್ಯಾಧಿಕಾರಿ ಐ.ಎಂ. ಆರೋಗ್ಯ ಸ್ವಾಮಿ, ಪೊಲೀಸ್ ಅರಣ್ಯ ಸಂಚಾರಿ ದಳದ ಎಎಸ್‍ಐ ಸುಭಾಷ್, ಸಿಬ್ಬಂದಿ ನಾಣಯ್ಯ, ಲಿಂಗರಾಜು, ಅರಣ್ಯ ರಕ್ಷಕರಾದ ಬಿ.ಬಿ. ತಿಮ್ಮಯ್ಯ, ಎನ್.ಜಿ. ಕುಶಾಲಪ್ಪ, ಭವ್ಯ, ವಾಸು, ವಾಹನ ಚಾಲಕರಾದ ಜಾನ್ ಮತ್ತು ಶ್ಯಾಮ್ ಭಾಗವಹಿಸಿದ್ದರು.