ಮಡಿಕೇರಿ, ಅ. 28: ಕೊಡಗಿನ ಗೌರಮ್ಮ ನೆನಪಿಗಾಗಿ ಅವರ ಮಗ ದಿ. ಬಿ.ಜಿ. ವಸಂತ್ ಸ್ಥಾಪಿಸಿರುವ ಕೊಡಗಿನ ಗೌರಮ್ಮ ವಾರ್ಷಿಕ ದತ್ತಿ ಪುರಸ್ಕಾರಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದೆ.

ಇದುವರೆಗೆ ಸದರಿ ಪುರಸ್ಕಾರಗಳನ್ನು ಪಡೆದಿರುವ ಲೇಖಕಿಯರನ್ನು ಹೊರತುಪಡಿಸಿ, ಜಿಲ್ಲೆಯ ಲೇಖಕಿಯರು ತಮ್ಮ ಕೃತಿಗಳನ್ನು ಪುರಸ್ಕಾರಕ್ಕೆ ನೀಡಬಹುದಾಗಿದ್ದು, ಒಬ್ಬರು ತಮ್ಮ ಒಂದು ಪುಸ್ತಕದ ಮೂರು ಪ್ರತಿಗಳನ್ನು ನವೆಂಬರ್ 12 ರೊಳಗೆ ಕನ್ನಡ ಸಾಹಿತ್ಯ ಪರಿಷತ್ ಕಚೇರಿ, ಕೋಟೆ ಆವರಣ ಇಲ್ಲಿಗೆ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಕಚೇರಿ ಕೆಲಸದ ವೇಳೆಯಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8277066123, 9980988123 ಸಂಪರ್ಕಿಸಬಹುದು ಎಂದರು ಪ್ರಕಟಿಸಿದೆ.