ಗೋಣಿಕೊಪ್ಪ ವರದಿ, ಅ. 28 : ಕೋತೂರು ಗ್ರಾಮದ ವಿ.ಎನ್. ಗಣೇಶ್ ಎಂಬವರಿಗೆ ಸೇರಿದ ಹಸು, ಕೋತೂರು ಭದ್ರಕಾಳಿ ದೇವಸ್ಥಾನ ಸಮೀಪ ಮೇಯುತ್ತಿದ್ದಾಗ ಪಕ್ಕದ ಕೆರೆಯಲ್ಲಿ ನೀರು ಕುಡಿಯಲು ತೆರಳಿದ ವೇಳೆ ಹುಲಿ ಹಸುವಿನ ಮೇಲೆರಗಿದೆ. ದನಗಾಹಿ ಪುಟ್ಟ ಎಂಬವರ ಎದುರೇ ಧಾಳಿ ನಡೆದಿದೆ. ಹಸುವನ್ನು ಕೊಂದು ಹಾಕಿ ಹುಲಿ ಕಾಲ್ಕಿತ್ತಿದೆ. 3 ಜಾನುವಾರುಗಳು ಮೇಯುತ್ತಿದ್ದಾಗ ಧಾಳಿ ನಡೆದಿದ್ದು, ಉಳಿದ ಜಾನುವಾರುಗಳು ರಕ್ಷಿಸಲ್ಪಟ್ಟಿವೆ. ಸ್ಥಳಕ್ಕೆ ನಾಗರಹೊಳೆ ಅರಣ್ಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.