ಮಡಿಕೇರಿ, ಅ. 28: ಬೆಟ್ಟಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ತಳೂರು ಕಿಶೋರ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕೂಪದಿರ ಮಾದಪ್ಪ ದೊರೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಿ ಎಲ್ಲಾ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತಲ್ಲದೆ, ಆಯ್ಕೆ ಪ್ರಕ್ರಿಯೆ ಮುಗಿಯಿತು.

ನಿರ್ದೇಶಕರುಗಳಾಗಿ, ಕಟ್ರತಂಡ ಡಿ. ಗಣೇಶ್, ಕಡ್ಲೇರ ಜಿ. ಕೀರ್ತನ್, ಎಡಿಕೆರಿ ವಾಸುದೇವ, ಕೊಳುಮಾಡನ ಜಯಪ್ರಕಾಶ್, ಅರಂಬೂರು ವಸಂತ ಕುಮಾರ್, ಮೇದರ ದೇವಯ್ಯ, ಪೋನ್ನೆಟ್ಟಿಯಂಡ ಮುತ್ತಣ್ಣ, ಎಸ್.ಪಿ. ಬಾಲಕೃಷ್ಣ, ಹೆಚ್. ಜವರ, ಬೆಪ್ಪುರನ ಪುಷ್ಪಾವತಿ ಆಯ್ಕೆಯಾಗಿದ್ದಾರೆ.