ಗೋಣಿಕೊಪ್ಪಲು,ಅ.28: ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲ 12 ಸ್ಥಾನಗಳನ್ನೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ.

ಹಾಲಿ ಅಧ್ಯಕ್ಷರಾಗಿರುವ ಅಜ್ಜಿಕುಟ್ಟೀರ ಪ್ರವೀಣ್ ಮುತ್ತಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದು, ಒಟ್ಟು ಚಲಾವಣೆ ಆದ 617 ಮತಗಳಲ್ಲಿ 517 ಮತಗಳನ್ನು ಪ್ರವೀಣ್ ಮುತ್ತಪ್ಪ ಗಳಿಸಿದ್ದಾರೆ.

ಇತರೆ ಗೆಲವು ಸಾಧಿಸಿದ ನಿರ್ದೇಶಕ ವಿವರ ಈ ರೀತಿ ಇದೆ. ಕಳ್ಳೇಂಗಡ ಎಂ.ಸುರೇಂದ್ರ(ಸುರೇಶ್) 394 ಮತ, ಕೋಳೇರ ಎಸ್. ನರೇಂದ್ರ ( ರಾಜ)-386, ಚೇಂದಿರ ಡಿ ತಿಮ್ಮಯ್ಯ(ರಘು)-347, ಬಲ್ಯಮಾಡ ತೃಶನ್ ಮಾದಯ್ಯ-372, ಬೊಳ್ಳುಮಾಡ ಎ.ದೇವಯ್ಯ(ಧನು)-329, ಕುಪ್ಪಣಮಾಡ ಸೀತಮ್ಮ-363, ಮಾರಮಾಡ ಪಿ.ಮಾಚಮ್ಮ(ಮನು)-379,ದುಗ್ಗಂಡ ಎಸ್. ಮಾದಯ್ಯ (ಮಿಕ್ಕಿ)-425, ಮೇಲತಂಡ ಎ.ರಮೇಶ್-444, ಹರಿಜನರ ಎನ್.ಕೃಷ್ಣ-397 ಹಾಗೂ ಮೀದೇರಿರ ಸವಿನ್-106 ಮತಗಳಿಸಿ ಆಯ್ಕೆಯಾಗಿದ್ದಾರೆ.