ಸೋಮವಾರಪೇಟೆ, ಅ. 30: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುವ ಬಗ್ಗೆ ಸುಂಟಿಕೊಪ್ಪದ ಜೇಸೀ ಸಂಸ್ಥೆಯ ವಲಯ ಕಾರ್ಯದರ್ಶಿ, ಸಂಪನ್ಮೂಲ ವ್ಯಕ್ತಿ ಡೆನ್ನಿಸ್ ಡಿಸೋಜ ಅವರು ಕಾರ್ಯಾಗಾರದ ಮೂಲಕ ಮಾಹಿತಿ ನೀಡಿದರು.

ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ, ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಎದುರಿಸಲು ಅನುಸರಿಸಬೇಕಾದ ಕ್ರಮಗಳು, ವ್ಯಾಸಂಗಕ್ಕೆ ಉಪಯುಕ್ತವಾದ ಸಮಯ, ಸ್ಥಳ, ಸಮಯ ಪರಿಪಾಲನೆ, ಮನೆ ವೇಳಾಪಟ್ಟಿ ತಯಾರಿ, ಗುಂಪು ಅಧ್ಯಯನದಿಂದ ಆಗುವ ಪ್ರಯೋಜನ ಸೇರಿದಂತೆ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಅನೇಕ ಸೌಲಭ್ಯಗಳ ತಿಳಿಸಿದರು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿಯ ಎ.ಎಸ್. ಮಹೇಶ್, ಶಿಕ್ಷಕರು ಉಪಸ್ಥಿತರಿದ್ದರು.