ಚೆಟ್ಟಳ್ಳಿ, ಅ. 29: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಟ್ಸ್ ಫೆಡರೇಷನ್‍ನ ಬಾಡಗ-ಬಾಣಂಗಾಲ ಮಟ್ಟಂ ಎಸ್.ಎಸ್.ಎಫ್. ಯೂನಿಟ್ ವತಿಯಿಂದ ‘ಯೌವ್ವನ ಮರೆಯಾಗುವ ಮುನ್ನ’ ಎಂಬ ಶೀರ್ಷಿಕೆಯಡಿ ಸಮ್ಮೇಳನ ನಡೆಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಯುನಿಟ್ ಅಧ್ಯಕ್ಷ ಸಿ.ಎಂ. ರಫೀಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಿಝಾಮುದ್ದೀನ್ ಸ್ವಾಗತ ಭಾಷಣ ಹಾಗೂ ಮಹಲ್ ಖತೀಬ ಬಶೀರ್ ಅಝ್ಹರಿ ಉದ್ಘಾಟಿಸಿದರು. ಪ್ರಾಸ್ತಾವಿಕ ಭಾಷಣವನ್ನು ಹಾರಿಸ್ ಸಖಾಫಿ ನೆಲ್ಲಿಹುದಿಕೇರಿ ಹಾಗೂ ಶಾಫಿ ಲತ್ವೀಫಿ ನುಚ್ಚಿಯಾಡ್ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿ ಕಾರ್ಯದರ್ಶಿ ರಫೀಕ್, ವೀರಾಜಪೇಟೆ ಕಾರ್ಯದರ್ಶಿ ಜುನೈದ್, ಎಸ್.ವೈ.ಎಸ್. ಅಧ್ಯಕ್ಷ ಜಲಾಲುದ್ದೀನ್ ಮುಸ್ಲಿಯಾರ್, ಸುನ್ನಿ ಮುಸ್ಲಿಂ ಜಮಾಅತ್ ಸಮಿತಿ ಅಧ್ಯಕ್ಷ ಎಂ. ಹುಸೈನ್, ಕಾರ್ಯದರ್ಶಿ ಉಮರ್, ಹಾರಿಸ್ ಸಖಾಫಿ, ನಸೀರ್ ಸೈದಲವಿ, ಮಹಮ್ಮದಾಲಿ, ಎಂ.ಹೆಚ್. ರಫೀಕ್ ಇನ್ನಿತರರು ಹಾಜರಿದ್ದರು.