ಮಡಿಕೇರಿ, ಅ. 30: ಸೋಮವಾರಪೇಟೆ ತಾಲೂಕಿನ ಆಹಾರ ನಿರೀಕ್ಷಕ ಡಿ. ರಾಜಣ್ಣ ಅವರು ಪಡಿತರ ಚೀಟಿ ವಿತರಣೆಯಲ್ಲಿ ಅಕ್ರಮ ಎಸಗಿರುವದು ಕಂಡುಬಂದಿದ್ದು, ಪಡಿತರ ಚೀಟಿ ವಿತರಣೆಯಲ್ಲಿ ಅಕ್ರಮ ಎಸಗಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಇವರನ್ನು ಜಿಲ್ಲಾಧಿಕಾರಿ ಅವರು ಅಮಾನತುಗೊಳಿಸಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಎಸ್. ಸದಾಶಿವಯ್ಯ ಅವರು ತಿಳಿಸಿದ್ದಾರೆ.