ಮಡಿಕೇರಿ, ಅ. 30: ನಗರದ ಮಾರುಕಟ್ಟೆಯ ಮುಂದುವರಿದ ಕಮಗಾರಿಗೆ ನಗರಸಭೆಯಿಂದ ಟೆಂಡರ್ ಕರೆಯಲಾಗಿದ್ದು, ನವೆಂಬರ್ 2 ರಂದು ಟೆಂಡರ್ ತೆರೆದ ಬಳಿಕ ಕಾಮಗಾರಿಗೆ ಚಾಲನೆ ನೀಡಲಿದ್ದು, ಕಾಂಗ್ರೆಸ್ ಸದಸ್ಯ ಹೆಚ್.ಎಂ. ನಂದಕುಮಾರ್ ಅವರ ಕೊಡುಗೆ ಏನೂ ಇಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ತಾ. 30ರ ‘ಶಕ್ತಿ’ಯಲ್ಲಿ ನಂದಕುಮಾರ್ ಅವರು 15 ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವದು ಎಂದಿರುವ ಬಗ್ಗೆ ಹೇಳಿಕೆ ನೀಡಿರುವ ಉಣ್ಣಿ, ನಂದಕುಮಾರ್ ಸಾಮಾನ್ಯ ಸದಸ್ಯನಾಗಿದ್ದು, ಈ ವಿಭಾಗಕ್ಕೆ ಸಂಬಂಧಿಸದಿದ್ದರೂ ಅಧ್ಯಕ್ಷರಂತೆ ಹೇಳಿಕೆ ನೀಡಿರುವದನ್ನು ಖಂಡಿಸುವದಾಗಿ ತಿಳಿಸಿದ್ದಾರೆ.