ಶನಿವಾರಸಂತೆ, ಅ. 29: ಪಟ್ಟಣದ ವಿಘ್ನೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನಿಯರು ಇತ್ತೀಚೆಗೆ ವೀರಾಜಪೇಟೆ ಯಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ದಲ್ಲಿ ಕಬಡ್ಡಿ ಮತ್ತು ಫುಟ್ಬಾಲ್ ಟೂರ್ನಿಯಲ್ಲಿ ಸ್ಪರ್ಧಿಸಿ, ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ದ್ದಾರೆ. ತುಮಕೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಾಲಕಿಯರ ವಿಭಾಗದ ಕಬಡ್ಡಿ ಟೂರ್ನಿಗೆ ವಿದ್ಯಾರ್ಥಿನಿ ಯರಾದ ಎಂ.ಎಲ್. ಗಾನವಿ, ಎಚ್.ಎಚ್. ಅಶ್ವಿತಾ, ಎಸ್.ಡಿ. ಅನುಷಾ, ಬಿ.ವಿ. ರಕ್ಷಾ, ಎಚ್.ವಿ. ವರ್ಷಾ, ಎಸ್.ಡಿ. ಅಂಕಿತಾ, ಎಂ.ಎಸ್. ಕೀರ್ತನಾ, ಎಚ್.ವಿ. ಸ್ಪೂರ್ತಿ, ಬಿ.ಎಸ್. ಸಿಂಚನಾ ಆಯ್ಕೆಯಾಗಿದ್ದಾರೆ.

ಮಂಡ್ಯದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಾಲಕಿಯರ ಫುಟ್ಬಾಲ್ ಟೂರ್ನಿಗೆ ಕೆ.ಆರ್. ಶ್ರಾವಣಿ, ಕೆ.ಪಿ. ಗಾನ್ಯಾ, ಎಸ್.ಡಿ. ಅನುಷಾ ಹಾಗೂ ಕೆ.ಎಂ. ಪೂಜಾ ಆಯ್ಕೆಯಾಗಿದ್ದಾರೆ.