ಮಡಿಕೇರಿ, ಅ. 31: ಮಡಿಕೇರಿ ತಾಲೂಕಿನ ಕುಂಬಳದಾಳು, ಹೊದ್ದೂರು, ಹೊದವಾಡ, ಕೊಟ್ಟಮುಡಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಕಾಡಾನೆಗಳನ್ನು ತಾ. 1ರಂದು (ಇಂದು) ಕಾರ್ಯಾಚರಣೆಯೊಂದಿಗೆ ಕಾಡಿಗೆ ಓಡಿಸಲಾಗುವದು ಎಂದು ಅರಣ್ಯಾಧಿಕಾರಿ ಆರೋಗ್ಯಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಸ್ಥರು, ಶಾಲಾ - ಕಾಲೇಜು ಮಕ್ಕಳು ಕಾರ್ಯಾಚರಣೆ ವೇಳೆ ಜಾಗೃತರಾಗಿರುವಂತೆ ಅವರು ಪತ್ರಿಕಾ ಹೇಳಿಕೆ ಮೂಲಕ ಮುನ್ಸೂಚನೆ ನೀಡಿದ್ದಾರೆ.