ಕೂಡಿಗೆ, ಅ. 31: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಆಯ್ಕೆಯ ಚುನಾವಣೆಗೆ ಸ್ಪರ್ಧಿಸಿ, ಕೆಲವು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಯಾವದೇ ಮತ ಪ್ರಚಾರ ಮಾಡದೆಯೇ 353 ಮತಗಳನ್ನು ಗಳಿಸಿ ಎರಡನೇ ಬಾರಿಗೆ ಜಯಶಾಲಿಯಾಗಿದ್ದಾರೆ. ತೊರೆನೂರು ಗ್ರಾಮದ ಗುತ್ತಿಗೆದಾರರಾದ ಕೆ.ಎಸ್. ಕೃಷ್ಣೇಗೌಡ ಅವರು ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಘೋಷಣೆಯಾದ ದಿನ ನಾಮಪತ್ರ ಸಲ್ಲಿಸಿದ್ದರು. ಅಂದಿನಿಂದ ಯಾವದೇ ಮತ ಪ್ರಚಾರ ನಡೆಸಿರಲಿಲ್ಲ. ತೀವ್ರ ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ದರಿಂದ ಮತ ಪ್ರಚಾರದಲ್ಲಿ ತೊಡಗಲು ಸಾಧ್ಯವಾಗಲಿಲ್ಲ. ಆದರೂ ಕೆ.ಎಸ್. ಕೃಷ್ಣೇಗೌಡ ಅವರು ಚುನಾವಣೆಯಲ್ಲಿ ಅತ್ಯಧಿಕ 353 ಮತಗಳನ್ನು ಪಡೆದು ಎರಡನೇ ಬಾರಿ ಜಯಶೀಲರಾಗಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ