ಶ್ರೀಮಂಗಲ, ಅ. 31: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಗೆ ವಿಯಟ್ನಾಂ ದೇಶದ ಕಳಪೆ ಕರಿ ಮೆಣಸನ್ನು ಆಮದು ಮಾಡಿಕೊಂಡು ಅಕ್ರಮವಾಗಿ ಕೊಡಗಿನ ಕರಿ ಮೆಣಸಿನೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಕೊಡಗು ಬೆಳೆಗಾರರ ಒಕ್ಕೂಟ ದಾಖÀಲಿಸಿದ್ದ ಶ್ರೀಮಂಗಲ, ಅ. 31: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಗೆ ವಿಯಟ್ನಾಂ ದೇಶದ ಕಳಪೆ ಕರಿ ಮೆಣಸನ್ನು ಆಮದು ಮಾಡಿಕೊಂಡು ಅಕ್ರಮವಾಗಿ ಕೊಡಗಿನ ಕರಿ ಮೆಣಸಿನೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಕೊಡಗು ಬೆಳೆಗಾರರ ಒಕ್ಕೂಟ ದಾಖÀಲಿಸಿದ್ದ ಒಕ್ಕೂಟದಿಂದ ಬೆಳೆಗಾರರಿಗೆ ನ್ಯಾಯಕ್ಕಾಗಿ ಸಂಬಂಧಿಸಿದ ಇಲಾಖೆಯಲ್ಲಿ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.ಗೋಣಿಕೊಪ್ಪ ಸಿಲ್ವರ್ ಸ್ಕೈ ಹೊಟೆಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳೆಗಾರರ ಒಕ್ಕೂಟದ ಪಧಾದಿಕಾರಿಗಳ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳ ಲಾಯಿತು. ಪೊನ್ನಂಪೇಟೆ ನ್ಯಾಯಾ¯ಯದಲ್ಲಿ ಒಕ್ಕೂಟ ದಾಖಲಿಸಿದ ಮೊಕದ್ದಮೆ ವಿಚಾರಣೆ ಸಂದರ್ಭ ಇದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಕಾಯಿದೆಗೆ ಒಳಪಡುವದರಿಂದ ಸಂಬಂಧಿಸಿದ ಪ್ರಾಧಿಕಾರಕ್ಕೆ ವರ್ಗಾಯಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬೆಳೆಗಾರರ ಒಕ್ಕೂಟದಿಂದ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ

(ಮೊದಲ ಪುಟದಿಂದ) ಮಳಿಗೆಯಲ್ಲಿ ಕೆಲವು ವ್ಯಾಪಾರಿಗಳು ವಿಯಟ್ನಾಂನಿಂದ ಕಳಪೆ ಕರಿಮೆಣಸನ್ನು ಆಮದು ಮಾಡಿಕೊಂಡು, ಕೃಷಿ ಉತ್ಪನ್ನ ಮಾರುಕಟ್ಟೆ ಕಾಯಿದೆಯನ್ನು ಉಲ್ಲಂಘಿಸಿರುವ ಬಗ್ಗೆ ದೂರು ಸಲ್ಲಿಸಲಾಗಿತ್ತು. ಅಕ್ರಮವಾಗಿ ಕರಿಮೆಣಸು ಪುಡಿ ಮಾಡಿ ಸಾವಿರಕ್ಕೂ ಅಧಿಕ ಚೀಲದಲ್ಲಿ ಸಂಗ್ರಹಿಸಿ ಮಾರಾಟ ಮಾಡಲು ಸಿದ್ಧವಾಗಿದ್ದನ್ನು ಪೋಲಿಸರ ಮೂಲಕ ವಶ ಪಡಿಸಿಕೊಳ್ಳಲಾಗಿತ್ತು. ಇದರ ಮಾದರಿಯನ್ನು ಪೋಲಿಸರ ಮೂಲಕವೇ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಗುಣಮಟ್ಟ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಪ್ರಕಾರ ಕರಿಮೆಣಸು ಪುಡಿಯಲ್ಲಿ ಮಾನವ ಸೇವನೆಗೆ ಸೂಕ್ತವಲ್ಲದಷ್ಟು ಹೆಚ್ಚುವರಿ ರಾಸಾಯನಿಕ ಇರುವದು ಪತ್ತೆಯಾಗಿದೆ. ಗರಿಷ್ಠ 0.27ರಷ್ಟು ಇರಬೇಕಾದ ರಸಾಯನಿಕ ಬಳಕೆ 1.27ರಷ್ಟು ಇರುವದನ್ನು ವರದಿಯಲ್ಲಿ ಉಲ್ಲೇಖಿಸಿದ್ದು, ಇದರಿಂದ ಕಳಪೆ ಗುಣ ಮಟ್ಟದ ಕರಿಮೆಣಸು ಇರುವದು ಸಾಭಿತಾಗಿದೆ ಅಲ್ಲದೆ ಇದು ಮಾನವ ಸೇವನೆಗೆ ಸೂಕ್ತವಲ್ಲ ಎಂಬದು ಸಹ ಆತಂಕಕಾರಿ ವಿಚಾರವಾಗಿದ್ದು ಈ ಬಗ್ಗೆ ಮುಂದಿನ ಹೋರಾಟ ನಡೆಸಲು ನಿರ್ಧರಿಸಲಾಯಿತು.

ರಸಗೊಬ್ಬರ ದರ ಏರಿಕೆಗೆ ಆತಂಕ : 2018 ಅಕ್ಟೋಬರ್ 1ರಿಂದ ರಸಗೊಬ್ಬರ ದರ ಏರಿಕೆಯಾಗಿದ್ದು ರÉೈತರು ಹಾಗೂ ಬೆಳೆಗಾರರಿಗೆ ತೀವ್ರ ಆತಂಕ ಮೂಡಿಸಿದೆ. ಈಗಾಗಲೆ ಅತಿವೃಷ್ಟಿ, ಹವಾಮಾನ ವೈಪರಿತ್ಯ, ಉತ್ಪಾದನ ವೆಚ್ಚ ಹೆಚ್ಚಳ, ಫಸಲು ಕುಂಠಿತ, ಮಾರುಕಟ್ಟೆ ದರ ಕುಸಿತದಿಂದ ಕಂಗಾಲಾಗಿರುವ ರೈತ ಸಮುದಾಯಕ್ಕೆ ರಸಗೊಬ್ಬರ ದರ ಏರಿಕೆ ಮತ್ತೊಂದು ದೊಡ್ಡ ಮಟ್ಟದ ಹೊರೆಯಾಗಿದೆ. ಪೊಟ್ಯಾಶ್ ರಸಗೊಬ್ಬರ 50 ಕೆ.ಜಿ ಚೀಲ ಒಂದಕ್ಕೆÉ ರೂ. 701 ರಿಂದ 948 ಕ್ಕೆ ಏರಿಕೆಯಾಗಿದ್ದು ಶೇ.35.3 ರಷ್ಟು, ಡಿ ಎ ಪಿ ರಸಗೊಬ್ಬರ ರೂ.1150 ರಿಂದ 1400 ಕ್ಕೆ ಏರಿಕೆಯಾಗಿದ್ದು ಶೇ. 21.8 ರಷ್ಟು ಏರಿಕೆಯಾಗಿz.É ಆದರೆ ರೈತರು ಬೆಳೆಯುವ ಉತ್ಪನ್ನಗಳು ಗಣನೀಯವಾಗಿ ಕುಸಿತವಾಗಿದೆ. ಕೆ.ಜಿ ಒಂದಕ್ಕೆ ರೂ. 730 ಇದ್ದ ಕರಿಮೆಣಸು ದರ 350 ಕ್ಕೆ ಕುಸಿದಿದೆ. ಕಾಫಿ ದರವು ಸಹ ಕಳೆದ ಎರಡು ದಶಕದಿಂದ ಉತ್ಪಾದನ ವೆಚ್ಚದ ಏರಿಕೆಗೆ ಅನುಸಾರ ಮಾರುಕಟ್ಟೆ ಇಲ್ಲದೆ ಕಳೆದ ಎರಡು ದಶಕದ ಹಿಂದೆ ಇದ್ದ ಮಾರುಕಟ್ಟೆ ದರಕ್ಕೆ ಕಡಿಮೆ ಇದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ರಸಗೊಬ್ಬರ ದರ ಏರಿಕೆ ಬೆಳೆಗಾರರನ್ನು ಮತ್ತಷ್ಟು ದುಸ್ಥಿತಿಗೆ ದೂಡಿದೆ ಎಂದು ಆತಂಕ ವ್ಯಕ್ತವಾಯಿತು.

ಆರ್.ಟಿ.ಸಿ. ದರ : ರೈತರಿಗೆ ಬೇಕಾದ ಆರ್.ಟಿ.ಸಿ. ವಿತರಿಸುವ ಕೆಲವು ಖಾಸಗಿ ಕೇಂದ್ರಗಳು ರೂ. 10ರ ಬದಲು ರೂ. 20 ಹಾಗೂ 30 ವಸೂಲಿ ಮಾಡುತ್ತಿದ್ದು, ರೈತರನ್ನು ಸುಲಿಗೆ ಮಾಡುವ ಇಂತಹ ಕೇಂದ್ರಗಳ ವಿರುದ್ದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಯಿತು.

ಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದದೇವಯ್ಯ, ಖಜಾಂಜಿ ಮಾಣೀರ ವಿಜಯ್‍ನಂಜಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿಸುಬ್ಬಯ್ಯ ಒಕ್ಕೂಟದ ವಿವಿಧ ವಿಬಾಗದ ಪದಾದಿಕಾರಿಗಳಾದ ಜಮ್ಮಡ ಮೋಹನ್‍ಮಾದಪ್ಪ, ಅರಮಣಮಾಡ ಸತೀಶ್‍ದೇವಯ್ಯ, ಆಶಾಜೇಮ್ಸ್, ಚೇಂದಂಡ ಸುಮಿಸುಬ್ಬಯ್ಯ, ಬೊಳ್ಳೆರ ಅಪ್ಪುಟಪೊನ್ನಪ್ಪ, ಅಣ್ಣಳಮಾಡ ಸುರೇಶ್, ಕೊಂಗಂಡ ಜೆಪ್ಪುಸುಬ್ಬಯ್ಯ, ಮೀದೆರಿರ ಕವಿತ, ತೀತಿರ ಊರ್ಮಿಳ ಸೋಮಯ್ಯ ಮತ್ತಿತರರು ಸಭೆಯಲ್ಲಿ ಮಾತನಾಡಿದರು.