ಮಡಿಕೇರಿ, ಅ. 31: ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಘವೇಂದ್ರ ದೇವಸ್ಥಾನ ಸನಿಹದ ನಿವಾಸಿಯೊಬ್ಬರು ನಾಪತ್ತೆಯಾಗಿರುವ ಕುರಿತು ನಗರ ಪೊಲೀಸರಿಗೆ ಪುಕಾರಾಗಿದೆ. ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಜು (35) ಎಂಬವರು ಕಾಣೆಯಾಗಿರುವ ಕುರಿತು ಅವರ ಪತ್ನಿ ಪ್ರೇಮ ದೂರು ನೀಡಿದ್ದಾರೆ. ಸಾಲದ ಬಾಧೆಗೆ ತುತ್ತಾಗಿದ್ದ ಇವರಿಗೆ ನ್ಯಾಯಾಲಯದಿಂದ ದಸ್ತಗಿರಿ ವಾರಂಟ್ ಜಾರಿಯಾಗಿತ್ತು ಎನ್ನಲಾಗಿದ್ದು, ಅ. 23ರಂದು ಸಂಜೆ ಮನೆಯಿಂದ ತೆರಳಿದವರು ಈತನಕ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ನಗರ ಠಾಣೆಯನ್ನು (229333) ಸಂಪರ್ಕಿಸುವಂತೆ ಇಲಾಖಾ ಪ್ರಕಟಣೆ ಕೋರಿದೆ.