ಮಡಿಕೇರಿ, ಅ. 31: ಮಡಿಕೇರಿ ತಾಲೂಕು ಅವಂದೂರು ಗ್ರಾಮದ ವಿವಿದೋದ್ಧೇಶ ಸಹಕಾರ ಧವಸ ಭಂಡಾರದ 2018-2023 ರ ಸಾಲಿನ ಅವಧಿಗೆ ಅಧ್ಯಕ್ಷರಾಗಿ ಪಟ್ಟಡ ಎಂ. ಪ್ರಭಾಕರ ಅವರು 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಚೊಕ್ಕಾಡಿ ಆನಂದ, ಕಾರ್ಯದರ್ಶಿಯಾಗಿ ಕಡ್ಯದ ಪಾಲಿ ಕೃಷ್ಣಪ್ಪ ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳಾಗಿ ಕಡ್ಯದ ರುಕ್ಮಿಣಿ, ಪಟ್ಟಡ ಲೀಲಾವತಿ, ಪಟ್ಟಡ ಹೇವಿತ, ದೇವಾಯಿರ ಶಿವಪ್ರಕಾಶ್, ಪಂಜದ ಚಂದ್ರಪ್ರಕಾಶ್, ಕಡ್ಯದ ಜೋಯಪ್ಪ ಹಾಗೂ ಬಿ.ಬಿ. ಲೋಕೇಶ್ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2019 ಕ್ಕೆ 100 ವರ್ಷ ತುಂಬುವ ಈ ಸಂದರ್ಭದಲ್ಲಿ 2020 ಕ್ಕೆ ನಡೆಯಲಿರುವ ಶತಮಾ ನೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಸಕಲ ಸಿದ್ಧತೆ ಯೊಂದಿಗೆ ಆಚರಿಸಬೇಕೆಂದು, ಅದಕ್ಕಾಗಿ ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕೆಂದು ನೂತನ ಅಧ್ಯಕ್ಷರು ವಿನಂತಿಸಿಕೊಂಡರು.