ಮಡಿಕೇರಿ, ಅ. 31 : ಇತ್ತೀಚೆಗೆ ಕುಶಾಲನಗರದ ಶ್ರೀಸಾಯಿ ಬಡಾವಣೆಯಲ್ಲಿ ಲೋಕಾರ್ಪಣೆಗೊಂಡ ಶ್ರೀ ಶಿರಡಿ ಸಾಯಿನಾಥ ಮಂದಿರದಲ್ಲಿ ತಾ.1 ರಂದು (ಇಂದು) ಸಾಯಿ ಸಹಸ್ರನಾಮ ಹೋಮ ನಡೆಯಲಿದೆ.

ಬೆಳಿಗ್ಗೆ 6.30ಕ್ಕೆ ಕಾಕಡಾರತಿ, 8 ಗಂಟೆಗೆ ಪಂಚಾಮೃತ ಅಭಿಷೇಕ, 8.30ಕ್ಕೆ ಪ್ರಸಾದ ವಿತರಣೆ, 9 ಗಂಟೆಗೆ ಸಾಯಿ ಸಹಸ್ರನಾಮ ಹೋಮ, ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ಮತ್ತು 12.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಸಾಯಿ ಭಜನೆ, 6.30ಕ್ಕೆ ಧೂಪಾರತಿ, ರಾತ್ರಿ 8 ಗಂಟೆಗೆ ಶೀಜಾರತಿ ಹಾಗೂ 8.30ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ.