ಕುಶಾಲನಗರ, ನ. 1: ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್‍ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಎಂ.ಆರ್. ನೌಷದ್, ಉಪಾಧ್ಯಕ್ಷರಾಗಿ ಮೋಕ್ಷಿತ್ ಗೌರವ್ ಪಟೇಲ್, ಗೌರವಾಧ್ಯಕ್ಷರಾಗಿ ಎ.ಜಿ. ಜಾನ್ಸನ್ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ. ಮಂಜುನಾಥ್, ಕಾರ್ಯದರ್ಶಿಯಾಗಿ ನಜ್ಮ ಭಾನು, ಖಜಾಂಚಿಯಾಗಿ ಬಿ.ಬಿ. ಲೋಹಿತ್, ನಿರ್ದೇಶಕರುಗಳಾಗಿ ಜಿನ್ಹಾಸುದ್ದೀನ್, ಹೂವಯ್ಯ, ಆಶಿಶ್, ಶಾಂತಪ್ರಕಾಶ್, ಕಿರಣ್, ಅವರುಗಳನ್ನು ನೇಮಿಸಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ನೊಂದವರ ಧ್ವನಿಯಾಗಿ ಕೊಡಗು ಚಾರಿಟೇಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಕ್ಷ ಎಂ.ಆರ್. ನೌಶಾದ್ ತಿಳಿಸಿದ್ದಾರೆ.