ಕೂಡಿಗೆ, ನ. 2: ಶಿರಂಗಾಲ ದಿಂದ ಕುಶಾಲನಗರದವರೆಗೆ ಇರುವ ರಾಜ್ಯ ಹೆದ್ದಾರಿಗೆ ತೊರೆನೂರಿನಿಂದ ಸೋಮವಾರಪೇಟೆ, ಬಾಣಾವರ ಸಂಪರ್ಕ ರಸ್ತೆಯೂ ತೀವ್ರವಾಗಿ ಹಾಳಾಗಿದ್ದು, ವಾಹನ ಸಂಚಾರಕ್ಕೆ ಸಾಧ್ಯವಾಗುವದಿಲ್ಲ. ಈ ಸಂಪರ್ಕವು ಚಿಕ್ಕಅಳುವಾರದ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಹತ್ತಿರವಾದ ದಾರಿ ಹಾಗೂ ತೊರೆನೂರು ಗ್ರಾಮಸ್ಥರಿಗೆ ಸೋಮವಾರಪೇಟೆಗೆ ತೆರಳಲು ಬಹು ಮುಖ್ಯವಾದ ರಸ್ತೆಯಾಗಿದ್ದು, ಈ ರಸ್ಥೆಯು ತೀರಾ ಹಾಳಾಗಿರುವದರಿಂದ ಲೋಕೋಪಯೋಗಿ ಇಲಾಖೆ ಅಥವಾ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿದ ರಸ್ತೆಯೋ ಎಂದು ಖಚಿತ ಪಡಿಸಿಕೊಂಡು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.