ಮಡಿಕೇರಿ, ನ. 1: ತುಮಕೂರಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ತಾ. 2 ರಿಂದ (ಇಂದಿನಿಂದ) ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಪೊನ್ನಂಪೇಟೆ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಾದ ಹೆಚ್.ಎಂ. ಮದನ್, ಪಿ.ಕೆ. ಶರಣು, ಜೆ.ಆರ್. ಹರೀಶ್, ಸಯ್ಯದ್ ಸುಹೇಬ್ ಆಯ್ಕೆಗೊಂಡಿದ್ದಾರೆ.

4x100 ಮೀ. ರಿಲೇ ಹಾಗೂ 100 ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಈ ಕ್ರೀಡಾಪಟು ಗಳಿಗೆ ದೈಹಿಕ ಶಿಕ್ಷಕ ಟಿ.ಎಸ್. ಮಹೇಶ್ ತರಬೇತುದಾರರಾಗಿ ತೆರಳಿದ್ದಾರೆ ಎಂದು ಮುಖ್ಯೋಪಾಧ್ಯಾಯರಾದ ಬಿ.ಎಂ. ವಿಜಯ್ ತಿಳಿಸಿದ್ದಾರೆ.