ಕುಶಾಲನಗರ, ನ. 1: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಸ್ಥಳೀಯ ಅನುಗ್ರಹ ಪದವಿ ಕಾಲೇಜಿನಲ್ಲಿ ರೋಟರ್ಯಾಕ್ಟ್ ಕ್ಲಬ್‍ಗೆ ಚಾಲನೆ ನೀಡಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷ ಜೇಕಬ್ ಅವರ ಅಧ್ಯಕ್ಷತೆಯಲ್ಲಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಕಾಲೇಜಿನ ರೋಟರ್ಯಾಕ್ಟ್ ಕ್ಲಬ್‍ನ ಅಧ್ಯಕ್ಷರಾಗಿ ಭವಿಷ್, ಕಾರ್ಯದರ್ಶಿಯಾಗಿ ವೆಂಕಟೇಶ್ ಆಯ್ಕೆಗೊಂಡರು.

ಈ ಸಂದರ್ಭ ಅನುಗ್ರಹ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಎಸ್.ಕೆ. ಸತೀಶ್, ಪ್ರಾಂಶುಪಾಲ ಟಿ.ವಿ. ಪಂಡರಿನಾಥ ನಾಯ್ಡು, ರೋಟರಿ ಸಂಸ್ಥೆಯ ಕಾರ್ಯದರ್ಶಿ ಪ್ರೇಮಚಂದ್ರನ್, ಪ್ರಮುಖರಾದ ನವೀನ್, ರಿಚರ್ಡ್ ಡಿಸೋಜ, ಶೋಭಾ ಸತೀಶ್, ಸಮನ್ವಯ ಅಧಿಕಾರಿಗಳಾದ ನೌಷದ್, ಕಾಲೇಜು ಉಪನ್ಯಾಸಕ ವೃಂದದವರು ಇದ್ದರು.