ಮಡಿಕೇರಿ, ನ. 1: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ 1990 ಅ. 30 ಹಾಗೂ ನ. 2ರಂದು ನಡೆದ ಐತಿಹಾಸಿಕ ಕಾರಸೇವೆ ಸಂದರ್ಭ ಬಲಿದಾನಗೈದವರ 28ನೇ ವರ್ಷದ ಸಂಸ್ಮರಣೆಯು ತಾ. 2ರಂದು (ಇಂದು) ಭಾರತೀಯ ವಿದ್ಯಾಭವನ ದಲ್ಲಿ ಅಪರಾಹ್ನ 4 ಗಂಟೆಗೆ ನಡೆಯಲಿದೆ ಎಂದು ವಿ.ಹಿ.ಪ., ಬಜರಂಗದಳ ಪ್ರಕಟಣೆ ತಿಳಿಸಿದೆ.

ಅಯೋಧ್ಯಾ ಆಂದೋಲನದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರ ಸಹಿತ ಹಿಂದೂ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಕೆ.ಹೆಚ್. ಚೇತನ್ ತಿಳಿಸಿದ್ದಾರೆ.