ಸುಂಟಿಕೊಪ್ಪ, ನ. 2: ಸಮೀಪದ ಯಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಗೆ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಉಚಿತ ಲ್ಯಾಪ್ ಟಾಪ್ ಅನ್ನು ಪ್ರಾಚಾರ್ಯ ಶ್ರೀಧರ್ ವಿತರಿಸಿದರು.

2017-18ನೇ ಸಾಲಿನಲ್ಲಿ ದಾಖಲಾತಿ ಹೊಂದಿ ಈ ವರ್ಷ ದ್ವಿತೀಯ ಬಿ.ಎ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಎಸ್.ಜಿ. ತೀರ್ಥಕಲಾ ಅವರಿಗೆ ಕಳೆದ ಬಾರಿಯ ಸರ್ಕಾರದ ಸವಲತ್ತು ದೊರೆತಿದೆ.

ನಂತರ ಮಾತನಾಡಿದ ಪ್ರಾಚಾರ್ಯ ಶ್ರೀಧರ್ ಅವರು, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಯೋಜನೆಗಳು, ಸವಲತ್ತುಗಳು ಲಭಿಸುತ್ತಿದೆ. ಅದರ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.

ವಿದ್ಯಾರ್ಥಿನಿಯ ಪೋಷಕ ಗಿರೀಶ್, ಕಾಲೇಜಿನ ಪ್ರಾಚಾರ್ಯ ಪ್ರೊ. ಶ್ರೀಧರ್, ಉಪನ್ಯಾಸಕರಾದ ಎಂ.ಎಸ್. ಶಿವಮೂರ್ತಿ, ಪ್ರವೀಣ್, ಸಹಾಯಕ ಗ್ರಂಥಪಾಲಕ ಧರ್ಮಪ್ಪ ಇದ್ದರು.