ಮಡಿಕೇರಿ, ನ. 2: ಇಂದಿರಾ ಗಾಂಧಿ ಕೇವಲ ಈ ದೇಶದ ಪ್ರಧಾನಿ ಮಾತ್ರ ಆಗಿರಲಿಲ್ಲ, ಬದಲಿಗೆ ಸ್ವಾಭಿಮಾನದ ಸಂಕೇತವಾಗಿದ್ದರು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕÀ ತೆನ್ನಿರ ಮೈನಾ ಬಣ್ಣಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾ ಗಾಂಧಿ ಅವರ 34ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದಿರಾ ಗಾಂಧಿ ಅವರು ಗರೀಬಿ ಹಟಾವೋ, ಬ್ಯಾಂಕ್ ರಾಷ್ಟ್ರೀಕರಣ, ರಾಜಧನರದ್ದತಿ, ಬಾಂಗ್ಲಾ ವಿಮೋಚನೆ, ಪೊಖ್ರಾನ್ ಅಣು ಪರೀಕ್ಷೆ, ಬಾಹ್ಯಾಕಾಶಯಾನ, ಹಸಿರು ಕ್ರಾಂತಿ ಮುಂತಾದವಗಳನ್ನು ಜಾರಿಗೊಳಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮಡಿಕೇರಿ, ನ. 2: ಇಂದಿರಾ ಗಾಂಧಿ ಕೇವಲ ಈ ದೇಶದ ಪ್ರಧಾನಿ ಮಾತ್ರ ಆಗಿರಲಿಲ್ಲ, ಬದಲಿಗೆ ಸ್ವಾಭಿಮಾನದ ಸಂಕೇತವಾಗಿದ್ದರು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕÀ ತೆನ್ನಿರ ಮೈನಾ ಬಣ್ಣಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾ ಗಾಂಧಿ ಅವರ 34ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದಿರಾ ಗಾಂಧಿ ಅವರು ಗರೀಬಿ ಹಟಾವೋ, ಬ್ಯಾಂಕ್ ರಾಷ್ಟ್ರೀಕರಣ, ರಾಜಧನರದ್ದತಿ, ಬಾಂಗ್ಲಾ ವಿಮೋಚನೆ, ಪೊಖ್ರಾನ್ ಅಣು ಪರೀಕ್ಷೆ, ಬಾಹ್ಯಾಕಾಶಯಾನ, ಹಸಿರು ಕ್ರಾಂತಿ ಮುಂತಾದವಗಳನ್ನು ಜಾರಿಗೊಳಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಿರುವದು ಕಾಂಗ್ರೆಸ್‍ನ ಪ್ರಾಮಾಣಿಕತೆಗೆ ಸಿಕ್ಕ ಗೌರವವಾಗಿದೆ ಎಂದು ಅಭಿಪ್ರಾಯಪಟ್ಟರು.

ನಗರಸಭಾ ಸದಸ್ಯ ಕೆ.ಎಂ. ವೆಂಕಟೇಶ್, ಕರಿಕೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯರ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಪ್ರಧಾನ ಕಾರ್ಯದರ್ಶಿ ಸ್ವರ್ಣಲತಾ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ನಗರ ಕಾಂಗ್ರೆಸ್ ಉಪಾಧ್ಯಕ್ಷೆ ಶಶಿಕಲಾ, ದೇವಸ್ಥಾನ ಸಮಿತಿ ಸದಸ್ಯ ಕುರಿಕಡ ಅನಂದ್, ಕುಸುಮ, ಸೇವಾದಳದ ಪ್ರೇಮ, ಮಮ್ತಾಜ್ ಬೇಗಂ, ಸದಾನಂದ ಬಂಗೇರ, ಎಂ. ಎಂ. ಹನೀಫ್, ಚಂದ್ರು, ರಾಣಿ, ಉಷಾ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

ಇಂದಿರಾ ಗಾಂಧಿಯವರ 34ನೇ ಪುಣ್ಯ ಸ್ಮರಣೆ ಪ್ರಯುಕ್ತ ಮಹಿಳಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಇಂದಿರಾ ಕ್ಯಾಂಟೀನ್‍ನಲ್ಲಿ ಮಧ್ಯಾಹ್ನದ ಊಟ ಮಾಡಿ ಮಾಜಿ ಪ್ರಧಾನಿಗೆ ವಿಶೇಷ ಗೌರವ ಸಲ್ಲಿಸಿದರು.