ಗೋಣಿಕೊಪ್ಪ ವರದಿ, ನ. 1: ನೊಕ್ಯಾ ಗ್ರಾಮದ ಗದ್ದೆಗೆ ಧಾಳಿ ನಡೆಸಿರುವ ಕಾಡಾನೆ ಭತ್ತದ ಫಸಲು ತಿಂದು ನಾಶ ಮಾಡಿರುವ ಘಟನೆ ನಡೆದಿದೆ. ಅಲ್ಲಿನ ಕೃಷ್ಣ ದೇವಸ್ಥಾನ ಸಮೀಪದ ಬೆಳೆಗಾರ ಚೆಪ್ಪುಡಿರ ಕಾರ್ಯಪ್ಪ ಎಂಬವರ ಗದ್ದೆಯನ್ನು ನಾಶ ಮಾಡಿವೆ. ನಾಟಿ ತೆನೆ ಕಟ್ಟಿತ್ತು. ಇದನ್ನು ಸಂಪೂರ್ಣವಾಗಿ ತಿಂದು ಕಾಡು ಸೇರಿಕೊಂಡಿವೆ.

ಸ್ಥಳಕ್ಕೆ ತಿತಿಮತಿ ಆರ್‍ಆರ್‍ಟಿ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿತು. ರಾತ್ರಿ 11 ಗಂಟೆವರೆಗೂ ಅರಣ್ಯದಿಂದ ಬರುವ ಆನೆಗಳನ್ನು ತಡೆಯಲಾಗಿತ್ತು. ತಮ್ಮ ತಂಡ ತೆರಳಿದ ನಂತರ ಮರಿಯೊಂದಿಗೆ ಬಂದ ಆನೆ ಫಸಲು ತಿಂದಿವೆ ಎಂದು ತಂಡದ ನಾಯಕ ಸಂಜು ತಿಳಿಸಿದ್ದಾರೆ. - ಸುದ್ದಿಪುತ್ರ