ಸೋಮವಾರಪೇಟೆ, ನ. 1: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂತ್ರಸ್ತರಾದ ಮೇಘತ್ತಾಳು ಗ್ರಾಮದ 13 ವೀರಶೈವ ಲಿಂಗಾಯತ ಕುಟುಂಬಗಳಿಗೆ, ಅಖಿಲ ಭಾರತ ವೀರಶೈವ ಮಹಾ ಸಭಾದ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ತಲಾ ರೂ. 10 ಸಾವಿರ ಆರ್ಥಿಕ ನೆರವು ಒದಗಿಸಲಾಯಿತು.

ಈ ಸಂದರ್ಭ ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ಸಂದೀಪ್, ಅರಮೇರಿ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ, ತಾಲೂಕು ವೀರಶೈವ ಮಹಾ ಸಭಾದ ಪದಾಧಿಕಾರಿಗಳಾದ ಎಸ್.ಎಸ್. ಸುರೇಶ್, ಎಸ್.ಎನ್. ಮಹದೇವಪ್ಪ, ಎಸ್.ಬಿ. ಜಗದೀಶ್, ಎಸ್.ಬಿ. ಮರಿಸ್ವಾಮಿ, ಎಸ್.ಎಸ್. ರಘು, ಎಸ್.ಎಸ್. ಬಸವಣ್ಣ, ಎಸ್.ಎನ್. ರಾಜೇಶ್ ಉಪಸ್ಥಿತರಿದ್ದರು,