ವೀರಾಜಪೇಟೆ, ನ. 1: ಪಟ್ಟಣ ಪಂಚಾಯಿತಿ ಚುನಾವಣೆಯ ವಿಷಯದಲ್ಲಿ ನಾಲ್ವರ ನಡುವೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಶಕೀಲ್ ಎಂಬಾತನಿಗೆ ಮೂವರು ಸೇರಿ ಹಲ್ಲೆ ನಡೆಸಿದರೊಂದಿಗೆ ತಲೆಗೆ ಗಂಭೀರ ಗಾಯಗೊಳಿಸಿದ ಮೇರೆಗೆ ಪೊಲೀಸರು ಯೂನಸ್, ಸಿಕಂದರ್ ಹಾಗೂ ಮೊಹಿಸಿನ ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಮೊಗರಗಲ್ಲಿ ನಿವಾಸಿ ದಿ. ಅಬ್ದುಲ್ ಗಫೂರ್ ಪುತ್ರ ಶಕೀಲ್ ಅಹಮ್ಮದ್ (36) ಹಲ್ಲೆಗೊಳಗಾದ ಗಾಯಳು ಅ. 31 ರಂದು ರಾತ್ರಿ 10 ಗಂಟೆಗೆ ಪಟ್ಟಣ ಪಂಚಾಯಿತಿಯ ಚುನಾವಣಾ ಫಲಿತಾಂಶದ ವಿಜಯೋತ್ಸವ ಅಚರಣೆ ಮುಗಿಸಿ ಮನೆಗೆ ಹಿಂದಿರುಗುವ ಸಮಯದಲ್ಲಿ ಮೊಗರಗಲ್ಲಿಯಲ್ಲಿ ಮೊಹಿಸಿನ್, ಸಿಖಂದರ್ ಮತ್ತು ಯೂನಸ್ ಎಂಬವರು ದ್ವಿಚಕ್ರ ವಾಹನ ತಡೆದು ಶಕೀಲ್ ಪತ್ನಿಗೆ ಅವಹೇಳನವಾಗುವಂತೆ ಮತ್ತು ಭಾ.ಜ.ಪ. ಅಭ್ಯರ್ಥಿಗೆ ಬೆಂಬಲ ನೀಡಿರುವ ವಿಚಾರವಾಗಿ ಕಲಹವಾಗಿದೆ. ಶಖೀಲ್ ನಗರ ಭಾ.ಜ.ಪ. ಅಲ್ಪಸಂಖ್ಯಾ ಘಟಕದ ಅಧ್ಯಕ್ಷರಾಗಿದ್ದಾರೆ. ಕಬ್ಬಿಣದ ಸಲಾಖೆಯಿಂದ ಶಕೀಲ್‍ನ ತಲೆ ಭಾಗ ಮತ್ತು ಎಡ ಕಾಲು ಭಾಗಕ್ಕೆ ಘಾಸಿಗೊಳಿಸಿದ್ದಾರೆ ಗಾಯಗೊಂಡ ಶಕೀಲ್ ನಗರದ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಾಲಾಗಿದ್ದಾರೆ ಗಾಯಾಳು ನೀಡಿರುವ ಹೇಳಿಕೆ ಮೇರೆಗೆ ಪೊಲೀಸರು ಮೂವರ ಮೇಲೆ ಹಲ್ಲೆ ಪ್ರಕರಣ ದಾಖಾಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.