ಮಡಿಕೇರಿ, ನ. 3: ಕುಮುಟಾದಲ್ಲಿ ಉಪವಿಭಾಗಾಧಿಕಾರಿಯಾಗಿದ್ದು, ಇತ್ತೀಚೆಗಷ್ಟೆ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಐ.ಎ.ಎಸ್. ಅಧಿಕಾರಿಣಿ ಕೆ. ಲಕ್ಷ್ಮಿಪ್ರಿಯ ಅವರು ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಮೂಲತಃ ಚೆನ್ನೈಯವರಾದ ಇವರು ಅಲ್ಲಿನ ಚೆಸಾರ್ಕ್ ಟೆಕ್ನಾಲಜೀಸ್ ಖಾಸಗಿ ಸಂಸ್ಥೆಯ ನಿರ್ದೇಶಕ ಹಾಗೂ ಚೀಫ್ ಆಪರೇಷನ್ ಆಫೀಸರ್ ಆಗಿರುವ ವಿ. ಮುಹಿಲ್ ಅವರನ್ನು ಅಕ್ಟೋಬರ್ 27ರಂದು ವಿವಾಹವಾಗಿದ್ದಾರೆ. ಪ್ರಸ್ತುತ ಲಕ್ಷ್ಮಿಪ್ರಿಯ ಅವರು ರಜೆಯಲ್ಲಿ ತೆರಳಿದ್ದು, ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಜಿ.ಪಂ. ಸಿ.ಇ.ಓ. ಸ್ಥಾನದ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ.