ಮಡಿಕೇರಿ, ನ. 3: ಕೊಡಗು ಹೆಗ್ಗಡೆ ಸಮಾಜ ಬಿಟ್ಟಂಗಾಲದಲ್ಲಿ ತಾ. 1 ರಂದು ಸಮಾಜದ ಅಧ್ಯಕ್ಷ ಪಿ.ಜಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ತೊಲಿಯಾರ್ ಪತ್ತಾಲೋದಿ ಸಮಾರಂಭವನ್ನು ನಡೆಸಲಾಯಿತು. ಸಮಾರಂಭದಲ್ಲಿ ಉಪಾಧ್ಯಕ್ಷ ಸರ ಚಂಗಪ್ಪ, ಕಾರ್ಯದರ್ಶಿ ಕಟ್ಟಿ ಕಾವೇರಪ್ಪ, ಖಜಾಂಚಿ ರಾಧ ಕುಟ್ಟಪ್ಪ, ಕೊಡವ ಅಕಾಡಮಿ ಸದಸ್ಯ ಮುದ್ದಯ್ಯ, ಸದಸ್ಯರುಗಳಾದ ಪಳಂಗಪ್ಪ, ಅಪ್ಪುಣಿ ಪೂವಯ್ಯ, ಕಾಳಪ್ಪ, ಕುಶಾಲಪ್ಪ, ಮಂಜು, ಸಲಿನಾ, ಶಾಂತಿ ಮತ್ತು ಇತರ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.