ಮಡಿಕೇರಿ, ನ. 3: ಪ್ರಾಕೃತಿಕ ವಿಕೋಪದ ನಡುವೆ ಕಳೆದ ಮೂರು ತಿಂಗಳಿನಿಂದ ಭಾರೀ ವಾಹನಗಳ ಸಹಿತ ಬಸ್ ಸಂಚಾರ ನಿರ್ಬಂಧಿಸಿದ ಮಡಿಕೇರಿ - ಮಂಗಳೂರು ಮಾರ್ಗದಲ್ಲಿ ಬಸ್ ಹಾಗೂ 16 ಟನ್ ಒಳಗಿನ ಸರಕು ವಾಹನಗಳ ಓಡಾಟಕ್ಕೆ ಈ ವಾರದೊಳಗೆ ಹಸಿರು ನಿಶಾನೆ ದೊರೆಯಲಿದೆ.

ಮೂಲಗಳ ಪ್ರಕಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಸಂಬಂಧಿಸಿದ ಇತರ ಅಧಿಕಾರಿಗಳ ಅಭಿಪ್ರಾಯ ಪಡೆದಿದ್ದು, ಒಂದೆರಡು ದಿನಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಬಸ್ ಸಂಚಾರ ಆರಂಭಗೊಳ್ಳಲಿರುವದಾಗಿ ಹೇಳಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಈ ದಿಸೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಾರಿಗೆ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯ ಮಾಹಿತಿ ಪಡೆದಿರುವರೆಂದು ಸುಳಿವು ಲಭಿಸಿದೆ.