ಮಡಿಕೇರಿ, ನ. 4: ಅಬಕಾರಿ ನಿರೀಕ್ಷಕರು, ಸೋಮವಾರಪೇಟೆ ವಲಯ ಇವರ ಕಚೇರಿ ಆವರಣದಲ್ಲಿರುವ ಅಬಕಾರಿ ಅಕ್ರಮಗಳಲ್ಲಿ ಜಪ್ತು ಪಡಿಸಿಕೊಂಡು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಕೆ.ಎ.19.ಎನ್.655 ವಾಹನವನ್ನು ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡುವ ಸಲುವಾಗಿ ಹರಾಜು ನಿರ್ವಹಣಾಧಿಕಾರಿಯನ್ನಾಗಿ ಅಬಕಾರಿ ಉಪ ಅಧೀಕ್ಷಕರು ಸೋಮವಾರಪೇಟೆ ಉಪವಿಭಾಗ, ಸೋಮವಾರಪೇಟೆ ಇವರನ್ನು ನೇಮಿಸಿದ್ದು, ಈ ವಾಹನವನ್ನು ಸೂಚಿಸಿರುವ ಷರತ್ತುಗಳ ಪ್ರಕಾರ ನವೆಂಬರ್, 15 ರಂದು ಬೆಳಗ್ಗೆ 11 ಗಂಟೆಗೆ ಅಬಕಾರಿ ನಿರೀಕ್ಷಕರ ಕಚೇರಿ ಸೋಮವಾರಪೇಟೆ ವಲಯ ಅವರ ಕಚೇರಿ ಆವರಣದಲ್ಲಿ ವಿಲೇವಾರಿ ಮಾಡಲಾಗುವದು ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಅವರು ತಿಳಿಸಿದ್ದಾರೆ.