*ಸಿದ್ದಾಪುರ, ನ. 25: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರೆ ಹಾಗೂ ದಿಡ್ಡಳ್ಳಿ ವ್ಯಾಪ್ತಿಯ 18 ಮಂದಿ ಗಿರಿಜನರಿಗೆ ಶಾಸಕ ಕೆ.ಜಿ. ಬೋಪಯ್ಯ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಹಕ್ಕುಪತ್ರವನ್ನು ವಿತರಿಸಿದರು. ಚೆನ್ನಯ್ಯನಕೋಟೆ ಗ್ರಾ.ಪಂ. ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಕ್ಕು ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭ ಚೆನ್ನಯ್ಯನಕೋಟೆ ಗ್ರಾ.ಪಂ. ಉಪಾಧ್ಯಕ್ಷೆ ಗಾಯತ್ರಿ, ಗ್ರಾ.ಪಂ. ಸದಸ್ಯರೂ ಗಿರಿಜನ ಮುಖಂಡರಾದ ಅಪ್ಪಾಜಿ, ಗ್ರಾ.ಪಂ. ಸದಸ್ಯರುಗಳಾದ ಮೆಕೇರಿರ ಅರುಣ್, ವಿಜಯನ್ ಅರಣ್ಯ ಭೂಮಿ ಹಕ್ಕು ಸಮಿತಿ ಸದಸ್ಯ ಜೆ.ಕೆ. ರಾಮು ಉಪಸ್ಥಿತರಿದ್ದರು.