ಮಡಿಕೇರಿ, ನ. 25: ಹುತ್ತರಿ ಹಬ್ಬದ ಸಂಭ್ರಮದ ಆಚರಣೆಯ ನಡುವೆ ವ್ಯಕ್ತಿಯೋರ್ವರು ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ತಾ. 23ರ ರಾತ್ರಿ ನಗರದಲ್ಲಿ ಸಂಭವಿಸಿದೆ.ಮಡಿಕೇರಿಯ ರೈಫಲ್‍ರೇಂಜ್‍ನ ನಿವಾಸಿ ಬೊಳಕಾರಂಡ ವೀಟು ನಾಣಯ್ಯ (65) ಅವರು ಸಂಜೆ ಮಡಿಕೇರಿ ಕೊಡವ ಸಮಾಜದಿಂದ ಕದಿರು ಪಡೆಯಲು ಆಗಮಿಸಿದ್ದು, ಸರತಿಯಲ್ಲಿ ನಿಂತಿದ್ದರು. ಈ ಸಂದರ್ಭ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.