ಗೋಣಿಕೊಪ್ಪಲು, ನ. 25: ಇತ್ತೀಚೆಗೆ ಉತ್ತರಾಖಂಡ ರಾಜ್ಯದ ನೆಹರು ಇನ್‍ಸ್ಟಿಟ್ಯೂಟ್ ಆಫ್ ಮೌಂಟೆನೇರಿಂಗ್ ಸಂಸ್ಥೆ ಆಯೋಜಿಸಿದ 40 ದಿನಗಳ ಪರ್ವತಾರೋಹಣ ತರಬೇತಿಗೆ ಗೋಣಿಕೊಪ್ಪಲಿನ ಕಾವೇರಿ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ.ಯ 19 ಏಂಖ ಃಓ ವಿದ್ಯಾರ್ಥಿ ರಾಹುಲ್ ಚಿನ್ನಪ್ಪ ಕೆ.ಎನ್. ಅವರು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಈರ್ವರಲ್ಲಿ ಒಬ್ಬನಾಗಿದ್ದಾನೆ.

ಈತ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಸಮುದ್ರಮಟ್ಟದಿಂದ 17,500ಮೀ ಎತ್ತರವಿರುವ ಉತ್ತರಕಾಶಿಯ ಆಏಆ1 ಪರ್ವತವನ್ನು ಏರುವದರ ಮೂಲಕ ಕೊಡಗಿನ ಮತ್ತು ಕಾವೇರಿ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ.ಘಟಕದ ಹಿರಿಮೆಯನ್ನು ಹೆಚ್ಚಿಸಿರುವದಾಗಿ ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ಮತ್ತು ಎನ್.ಸಿ.ಸಿ. ಅಧಿಕಾರಿ ಅಕ್ರಂ ಎಂ.ಆರ್. ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಪದಾಧಿಕಾರಿ ತಿರುಮಲಯ್ಯ ಎಸ್.ಆರ್. ಅವರುಗಳು ತಿಳಿಸಿದ್ದಾರೆ.