ಮಡಿಕೇರಿ, ನ. 26: ರಾಮಕೃಷ್ಣ ಮಹಾಸಂಘದ ಹಿರಿಯ ಸನ್ಯಾಸಿ ಇತ್ತೀಚೆಗೆ ದೈವಾಧೀನರಾದ ಜಗದಾತ್ಮನಂದಜಿ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ತಾ. 27 ರಂದು (ಇಂದು) ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯೋಜಿಸಲಾಗಿದೆ. ಆಫ್ರಿಕಾ ಸೇರಿದಂತೆ ವಿವಿಧೆಡೆಗಳಿಂದ ಆಶ್ರಮದ ಅನುಯಾಯಿಗಳು ಆಗಮಿಸಿರುವದಾಗಿ ಆಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದಜಿ ತಿಳಿಸಿದ್ದಾರೆ.