ಕೂಡಿಗೆ, ನ. 26: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಧುಗಿರಿಯಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮಾನಸ ನಾರಾಯಣ ಭಾಗವಹಿಸಿ, ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈ ವಿದ್ಯಾರ್ಥಿಯು ಕುಶಾಲನಗರ ಫಾತಿಮ ಕಾನ್ವೆಂಟ್ ಹೈಯರ್ ಪ್ರೈಮರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ. ಕುಶಾಲನಗರ ಕೆನರಾ ಬ್ಯಾಂಕ್ ಶಾಖೆಯ ಅಧಿಕಾರಿ ನಾರಾಯಣ ಮತ್ತು ಸಂಧ್ಯ ದಂಪತಿ ಪುತ್ರಿಯಾಗಿದ್ದು, ಆರೋಗ್ಯ ಸ್ವಾಮಿ (ಮಣಿ) ತರಬೇತಿ ನೀಡುತ್ತಿದ್ದಾರೆ.