ನಾಪೆÇೀಕ್ಲು, ನ. 26: ಇತ್ತೀಚೆಗೆ ಜಿಲ್ಲಾ ಸಹಕಾರ ಯೂನಿಯನ್‍ನಿಂದ ಮಡಿಕೇರಿ ತಾಲೂಕಿನ ಉತ್ತಮ ಸಹಕಾರಿ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ನಾಪೆÇೀಕ್ಲು ಕ.ಸಾ.ಪ ಘಟಕದ ಗೌರವಾಧ್ಯಕ್ಷರಾದ ಬೊಪ್ಪೇರ ಸಿ.ಕಾವೇರಪ್ಪ ಅವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ನಂತರ ಮಾತನಾಡಿದ ನಾಪೆÇೀಕ್ಲು ಕ.ಸಾ.ಪ ಘಟಕದ ಅಧ್ಯಕ್ಷ ಸಿ.ಎಸ್. ಸುರೇಶ್ ನಮ್ಮ ಘಟಕದ ಗೌರವಾಧ್ಯಕ್ಷರಿಗೆ ಪ್ರಶಸ್ತಿ ಲಭಿಸಿರುವದು ಹೆಮ್ಮೆ ತಂದಿದೆ. ಇಳಿವಯಸ್ಸಿನಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಅವರು ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಘಟಕದ ಏಳಿಗೆಗೂ ಅವರು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಅವರ ಸಹಕಾರ, ಮಾರ್ಗದರ್ಶನ ಘಟಕಕ್ಕೆ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸದಸ್ಯೆ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿ ತಳೂರು ಉಷಾರಾಣಿ, ನಾಪೆÇೀಕ್ಲು ಕ.ಸಾ.ಪ. ಘಟಕದ ಪದಾಧಿಕಾರಿಗಳಾದ ಎನ್.ಕೆ.ಪ್ರಭು, ಎಂ.ಎ. ಮನ್ಸೂರ್ ಅಲಿ, ಪಿ.ವಿ. ಪ್ರಭಾಕರ್, ಎಸ್.ಪಿ. ಕುಟ್ಟಪ್ಪ ಇದ್ದರು.