ಕೂಡಿಗೆ, ನ. 26: ಮಳೆಯಿಂದ ಮನೆ ಕಳೆದುಕೊಂಡ ಬಡವರಿಗೆ ಪರಿಹಾರದ ಹಣ ಬಂದಿಲ್ಲ. ಸುಂದರನಗರದ ರತ್ನ, ಪ್ರೇಮ, ಶಿವಮ್ಮ, ಪಾರ್ವತಿ, ನೀಲಮ್ಮ, ಬಸವೇಶ್ವರ ಬಡವಾಣೆಯ ಮಂಜಳಾ, ಎಂಬವರ ಮನೆಗಳು ಮಳೆಯಿಂದಾಗಿ ಗೋಡೆ ಕುಸಿದು ತೀರಾ ಹಾಳಾಗಿದೆ.

ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ನಷ್ಟಕ್ಕೊಳಗಾದ ವ್ಯಕ್ತಿಗಳಿಂದ ಅರ್ಜಿಯನ್ನು ಪಡೆದಿದ್ದರು. ಈಗಾಗಲೇ ಮೂರು ತಿಂಗಳು ಕಳೆದರೂ ಯಾವದೇ ಪರಿಹಾರ ಇಲ್ಲದಂತಾಗಿದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇವರುಗಳು ಅರ್ಜಿ ಜೊತೆಯಲ್ಲಿ ಕಂದಾಯ ಇಲಾಖೆಯ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ.

ಸಂಬಂಧಪಟ್ಟ ಇಲಾಖೆಯವರು ಬೇಗ ಪರಿಹಾರ ಒದಗಿಸುವ ಪ್ರಯತ್ನ ಮಾಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯಿಸಿದ್ದಾರೆ.