ಗುಡ್ಡೆಹೊಸೂರು, ನ. 26: ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ 29ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಮ್ಮೇಳನದಲ್ಲಿ ಸಂಚಾರಿ ಆರೋಗ್ಯ ಘಟಕ ಕುಶಾಲನಗರದಲ್ಲಿ ಹಿರಿಯ ವೈದ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಚೇತನ್ ಮೇಡತನ ಇವರಿಗೆ ಗ್ರಾಮೀಣ ಪ್ರದೇಶದಲ್ಲಿ ಸಲ್ಲಿಸಿದ ಸೇವೆಗಾಗಿ ಹಾಗೂ ಜಿಲ್ಲೆಯಾದ್ಯಂತ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ (ಟ್ಯುಬೆಕ್ಟಮಿ) ಮಾಡುತ್ತಿರುವ ಸಾಧನೆಗಾಗಿ ವ್ಯೆದ್ಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇವರು ಮೂಲತಃ ಮೂರ್ನಾಡಿನ ಬಲಮುರಿ ನಿವಾಸಿ, ಮೇಡತನ ಉಲ್ಲಾಸ್ ಹಾಗೂ ಚಂದ್ರಮ್ಮನವರ ಪುತ್ರರಾಗಿದ್ದಾರೆ.

-ಗಣೇಶ್ ಕುಡೆಕ್ಕಲ್