ಕೂಡಿಗೆ, ನ. 26: ಹೆಬ್ಬಾಲೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ನಡೆದಿದ್ದು, ಸಾಲಗಾರರ ಸಾಮಾನ್ಯ ಕೇತ್ರ ದಿಂದ ಹೆಚ್.ಎಸ್.ಮಹಾದೇವ (335) ಹೆಚ್.ಟಿ. ಪರಮೇಶ(324) ಹೆಚ್.ಟಿ. ದಿನೇಶ್ (318) ಹೆಚ್. ಸಿ. ಜಲೇಂದ್ರ (371) ಹೆಚ್.ಟಿ. ಮೋಹನ್, (237) ಸಾಲಗಾರ ಮಹಿಳಾ ಮೀಸಲು ಕೇತ್ರದಿಂದ ಹೆಚ್.ಕೆ. ಕವಿತಾ (465) ಎಂ.ಎಸ್. ಶಶಿಕಲಾ (355) ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ಕೇತ್ರ ದಿಂದ ಹೆಚ್.ಕೆ. ಸ್ವಾಮಿ (327) ಆಯ್ಕೆಗೊಂಡರು.

ಸಾಲಗಾರ ಪರಿಶಿಷ್ಟ ಪಂಗಡ ಮೀಸಲು ಕೇತ್ರದಿಂದ ಎಂ.ಎಂ. ಮಹದೇವ, ಸಾಲಗಾರರ, ಹಿಂದುಳಿದ ವರ್ಗಗಳ ಮೀಸಲು ಕೇತ್ರದಿಂದ ಹೆಚ್. ವಿ. ಸೋಮಶೇಖರ್, ಹೆಚ್. ಎಲ್. ರವಿಚಂದ್ರ ಹಾಗೂ ಸಾಲಗಾರರಲ್ಲದ ಕೇತ್ರದಿಂದ ಹೆಚ್.ಆರ್. ಮಣಿಕಂಠ ಆಯ್ಕೆಗೊಂಡಿದ್ದಾರೆ. ಈ ಚುನಾವಣಾ ಕಣದಲ್ಲಿ 22ಮಂದಿ ಅಭ್ಯಥಿರ್üಗಳು ಸ್ಪರ್ಧೆ ಮಾಡಿದ್ದರು. ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಮೋಹನ್, ಹಾಗೂ ತೊರೆನೂರು ಸಹಕಾರ ಸಂಘ ಕಾರ್ಯದರ್ಶಿ ಜೀವನ್ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.