ಮಡಿಕೇರಿ, ನ. 27: ಕುಶಾಲನಗರ ಸಮೀಪದ ಮುಳ್ಳುಸೋಗೆ ಕಾವೇರಿ ನದಿಯ ಅನತಿ ದೂರದಲ್ಲೇ ಅಪರಿಚಿತ ಶವವೊಂದು ಸ್ಥಳಕ್ಕೆ ಕುಶಾಲನಗರ ನಗರ ಪೊಲೀಸರು ತೆರಳಿ ಶವವನ್ನು ಮೇಲೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ಸುಮಾರು 40ರಿಂದ 50 ವರ್ಷದೊಳಗಿನ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವನ್ನಪ್ಪಿ ಸುಮಾರು ಮೂರರಿಂದ ನಾಲ್ಕು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ಕುಶಾಲನಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾವೇರಿ ನದಿಯಿಂದ ಶವವನ್ನು ಮೇಲೆ ತೆಗೆಯುವ ಸಂದರ್ಭ ಕುಶಾಲನಗರ ಠಾಣಾಧಿಕಾರಿ ಜಗದೀಶ್, ಸಿಬ್ಬಂದಿಯಾದ ರಾಜೇಶ್ ಹಾಗೂ ಇಲಾಖೆ ನೌಕರರಾದ ರಹಿಮಾನ್ ಮತ್ತು ಮುನೀರ್ ಹಾಜರಿದ್ದರು.