ಮಡಿಕೇರಿ, ನ. 27: ಅಂತರರಾಷ್ಟ್ರೀಯ ಅಥ್ಲೀಟ್ ಕೊಡಗಿನ ತೀತಮಾಡ ಅರ್ಜುನ್ ದೇವಯ್ಯ ಅವರ ಕಾರು ಇಂದು ಬೆಳಗ್ಗಿನ ಜಾವ ಮೈಸೂರು ರಸ್ತೆ ಕೆ.ಆರ್.ಎಸ್. ಮಾರ್ಗದ ಸನಿಹ ಅವಘಡಕ್ಕೀಡಾಗಿ ರುವ ದುರ್ಘಟನೆ ನಡೆದಿದೆ. ಅರ್ಜುನ್ ದೇವಯ್ಯ ಅವರು ಪತ್ನಿ ದಿವ್ಯಾ ಹಾಗೂ ಇತರ ಸಂಬಂಧಿಕ ರೊಂದಿಗೆ ಬೆಂಗಳೂರಿನತ್ತ ತೆರಳುತ್ತಿದ್ದ ಸಂದರ್ಭ ಕಾರು ಬೆಳಗ್ಗಿನ ಜಾವ ತೀರಾ ಮಂಜು ಕವಿದಿದ್ದರಿಂದ ರಸ್ತೆ ಕಾಣದೆ ನಿಯಂತ್ರಣ ತಪ್ಪಿದೆ. ಘಟನೆ ಯಿಂದ ಅರ್ಜುನ್ ಸೇರಿದಂತೆ ಪತ್ನಿ ದಿವ್ಯಾಗೆ ಸಣ್ಣಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ. ಅವಘಡದ ಬಳಿಕ ತಾವು ಕ್ಷೇಮವಾಗಿರುವದಾಗಿ ಅರ್ಜುನ್ ಸಾಮಾಜಿಕ ಜಾಲ ತಾಣದಲ್ಲಿ ಸಂದೇಶ ರವಾನಿಸಿದ್ದು ಸ್ನೇಹಿತರು ಸಂಬಂಧಿಕರು ಇದರಿಂದ ತುಸು ನಿರಾಶರಾಗಿದ್ದಾರೆ.