ಚೆಟ್ಟಳ್ಳಿ, ನ. 27: ಮಡಿಕೇರಿ ಸಮೀಪದ ಮೇಕೇರಿಯ ಬ್ಲೂ ವಾರಿಯರ್ಸ್ ವತಿಯಿಂದ ನಡೆದ ಅಂಡರ್ 18 ಕಾಲ್ಚೆಂಡು ಪಂದ್ಯಾಟದಲ್ಲಿ ಕೆ.ವೈ.ಸಿ ಕೊಂಡಂಗೇರಿ ತಂಡ ಮಡಿಕೇರಿ ತಂಡವನ್ನು ಫೈನಲ್‍ನಲ್ಲಿ 3-0 ಗೋಲುಗಳ ಅಂತರದಿಂದ ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನಕ್ಕೆ ಮಡಿಕೇರಿ ತಂಡ ತೃಪ್ತಿ ಪಟ್ಟುಕೊಂಡಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಕೆ.ವೈ.ಸಿ ಕೊಂಡಂಗೇರಿ ತಂಡವು , ಮರಗೋಡು ತಂಡವನ್ನು 3-0 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮಡಿಕೇರಿ ತಂಡವು ಆತಿಥೇಯ ಮೇಕೇರಿ ತಂಡವನ್ನು 1-0 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.

ಕ್ರೀಡಾಕೂಟದಲ್ಲಿ 20 ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಕೆ.ವೈ.ಸಿ. ತಂಡದ ಸುಹೈಲ್ ಪಡೆದುಕೊಂಡರು. ಈ ಸಂದರ್ಭ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದ ಸಂಸ್ಥಾಪಕ ಆಸಿಫ್ (ಆಪು) ಅಸ್ಕರ್, ಜುನೈದ್ ಮತ್ತಿತ್ತರರು ಇದ್ದರು.