ನಾಪೆÇೀಕ್ಲು, ನ. 27: ಎನ್ಸಿಸಿ ವತಿ ಯಿಂದ ವಿಯಾಟ್ನಂನಲ್ಲಿ ನಡೆಯುವ ಯೂತ್ ಎಕ್ಸ್ಚೇಂಜ್ ಪ್ರೊಗ್ರಾಮ್ (ವೈಇಪಿ)ಗೆ ಭಾರತದ ರಾಯಭಾರಿಯಾಗಿ ಬೆಂಗಳೂರಿನ ಆರ್.ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅರೆಯಡ ಕೃತಿಕಾ ದೇವಯ್ಯ ಆಯ್ಕೆಯಾಗಿದ್ದಾರೆ.
ಕರ್ನಾಟಕ ಮತ್ತು ಗೋವಾ ಡೆರೆಕ್ಟರೇಟ್ನಿಂದ ಆಯ್ಕೆಯಾದ ಏಕೈಕ ಎನ್ಸಿಸಿ ಕೆಡೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು ಕಕ್ಕಬ್ಬೆ ಸಮೀಪದ ಯವಕಪಾಡಿ ಗ್ರಾಮದ ಅರೆಯಡ ಜೀವನ್ ದೇವಯ್ಯ ಹಾಗೂ ಬಬಿತಾ ದೇವಯ್ಯ ಅವರ ಪುತ್ರಿಯಾಗಿದ್ದಾರೆ.