*ಗೋಣಿಕೊಪ್ಪ, ನ. 28: 16 ವರ್ಷದ ಒಳಗಿನ ರಾಜ್ಯ ಫುಟ್‍ಬಾಲ್ ತಂಡದ ನಾಯಕರಾಗಿ ಬಾಳೆಯಡ ಮ್ರಿನಾಲ್ ಮುತ್ತಣ್ಣ ಆಯ್ಕೆಯಾಗಿದ್ದಾನೆ. ಬೆಂಗಳೂರಿನಲ್ಲಿ ನೆಲೆಸಿರುವ ಬಾಳೆಯಡ ಸತೀಶ್ ಮತ್ತು ಬಿಂದು ದಂಪತಿಗಳ ಪುತ್ರರಾಗಿರುವ ಈತ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತಾ. 30 ರಂದು ಕೊಲ್ಕತ್ತಾದ ವರಿಸಾದಲ್ಲಿ ನಡೆಯುವ ರಾಜ್ಯಮಟ್ಟದ ಫುಟ್‍ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.