ಸೋಮವಾರಪೇಟೆ, ನ. 28: ಕೊಡಗು ಜಿಲ್ಲಾ ಬ್ರಾಹ್ಮಣ ಸಮಾಜ ಒಕ್ಕೂಟದ ಸಭೆ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ನಡೆಯಿತು. ಜಿಲ್ಲೆಯ 10 ಬ್ರಾಹ್ಮಣ ಸಮಾಜಗಳ ಪದಾಧಿಕಾರಿಗಳನ್ನು ಸೇರಿಸಿಕೊಂಡು ಒಕ್ಕೂಟ ರಚಿಸಲಾಗಿದ್ದು, ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವದು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ ಹೇಳಿದರು. ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಅರುಣ್ ಕುಮಾರ್, ಸೋಮೇಶ್ವರ ದೇವಾಲಯ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ.ವಿಜೇತ್, ಹಿರಿಯ ಸದಸ್ಯರಾದ ನಂದಕುಮಾರ್, ಚಂದ್ರಶೇಖರಯ್ಯ ಮತ್ತಿತರರು ಇದ್ದರು.