ಕೂಡಿಗೆ, ನ. 29: ಕೂಡಿಗೆ ಡೈರಿಯಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಹೆಚ್.ಎ. ಪ್ರಕಾಶ್ ಅವರಿಗೆ ಶಿರಂಗಾಲ ಹಾಲು ಉತ್ಪಾದಕರ ಸಂಘದ ವತಿಯಿಂದ ಬೀಳ್ಕೊಡಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಎಸ್.ಪಿ. ರಾಜು, ಉಪಾಧ್ಯಕ್ಷೆ ರತ್ನಮ್ಮ, ಮಾಜಿ ಅಧ್ಯಕ್ಷ ಎಸ್.ಸಿ. ಪ್ರಕಾಶ್, ಎಸ್.ಹೆಚ್ ರಾಜಪ್ಪ, ಕಾರ್ಯದರ್ಶಿ ಎಂ.ಎಂ. ಶಿವರಾಮ್, ಸಂಘದ ಸದಸ್ಯರು ಇದ್ದರು.