ಭಾಗಮಂಡಲ, ನ. 29: ಇಲ್ಲಿನ ಚೇರಂಗಾಲ ಗ್ರಾಮದ ಶ್ರೀ ಈಶ್ವರ ಭಗವತಿ ದೇವಾಲಯದಲ್ಲಿ ವಾರ್ಷಿಕ ವಿಶೇಷ ಪೂಜೆ ನಡೆಯಿತು.

ಈ ಸಂದರ್ಭ ಭಾಗಮಂಡಲ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯರಾದ ಸಿರಕಜೆ ಟಿ. ಭವನ್ ಕುಮಾರ್, ಕುಂಬನ ಸಿ. ರವೀಂದ್ರ, ಮೂಲೆಮಜಲು ಎ. ಸುದೀಪ್ ಹಾಗೂ ಅರ್ಚಕ ರವಿ ಭಟ್ 8ನೇ ವರ್ಷದ ಅನ್ನದಾನವನ್ನು ನಡೆಸಿಕೊಟ್ಟರು. ಈ ಸಂದರ್ಭ ದೇವಸ್ಥಾನದ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.