ಕೂಡಿಗೆ, ನ. 29: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದ ಗಿರಿಜನ ಹಾಡಿಗಳಿಗೆ ಕೇಂದ್ರ ಸರಕಾರದಿಂದ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಯೋಜನೆ ಗುತ್ತಿಗೆ ಪಡೆದ ತಂಡ ಭೇಟಿ ನೀಡಿ ಪರಿಶೀಲಿಸಿತು.

ಜಿಲ್ಲೆಯಲ್ಲಿ ಪ್ರಥಮವಾಗಿ ಹುದುಗೂರು ಗ್ರಾಮದ ಗಂಧದ ಹಾಡಿ ಹಾಗೂ ಸೀತಾ ಕಾಲೋನಿಗೆ ತಂಡ ಭೇಟಿ ನೀಡಿತು. ಈ ಹಾಡಿಯ ಮನೆಗಳಿಗೆ ವಿದ್ಯುತ್ ಸೌಲಭ್ಯ ಇರಲ್ಲಿಲ್ಲ, ಅದರಿಂದ ಸ್ಥಳೀಯ ಜನಪ್ರತಿನಿಧಿಗಳು ಈ ವ್ಯಾಪ್ತಿಯ 30 ಕುಟುಂಬದ ಸದಸ್ಯರುಗಳ ಬಿ.ಪಿ.ಎಲ್. ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳ ಅರ್ಜಿ ಸಲ್ಲಿಸಿದರು.

ಇದೀಗ ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದೆ. ಈ ಟೆಂಡರ್‍ಅನ್ನು ಕೆ.ಆರ್. ಪೇಟೆಯ ಮಂಜುನಾಥ ಪಡೆದಿದ್ದಾರೆ. ಇವರು ಸ್ಥಳೀಯ ವಿದ್ಯುತ್ ನೌಕರರಾದ ಪ್ರವೀಣ್, ವೆಂಕಟೇಶ್‍ರೊಂದಿಗೆ ಹಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.